ಈ ಪುಟ್ಟ ಬಾಲಕನ ಕಣ್ಣುಗಳು ದಿಟ್ಟಿಸುತಿವೆ,
ಯಾವ ದಿಕ್ಕಿಗೆ ಹೋಗಲಿ ತಾನು ಎಂದು.
ಜಗದುದ್ದಗಲದಲಿ ಒಂದು ಪುಟ್ಟ ಬಿಂದುವಾಗಿದ್ದರೂ,
ಆಸೆ ಕನಸುಗಳು ನೂರಾರು.
ಕನಸುಗಳು ಗರಿ ಬಿಚ್ಚಿ ನರ್ತನ ಮಾಡುವ ಭರದಲಿ,
ಬಡತನದ ಈ ಶಾಪ ಬರೀ ದುಃಸ್ವಪ್ನವಾಗಿರಲೆಂದು,
ಆಶಿಸುತಿಹನೇನೋ ಈತ
ರೈಲು ಕಂಬಿಗಳಂತೆ ಉದ್ದವಾಗಿ ಧೃಡವಾಗಿ ,
ಬೆಳೆಯಬೇಕೆಂಬ ಬಯಕೆ.
ಆದರೆ ಆರ್ತನಾದವನು ಬೀರುತಿದೆ ,
ಬಡತನದ ಕೇಕೆ.
ಸಿಗಲಿ ಇವನಿಗೆ ಕನಸಿನ ಖಜಾನೆಯ ಬೀಗ
ಶ್ರೀಮಂತವಾಗಲಿ ಭಾರತವು ಬೇಗ
No comments:
Post a Comment