Monday 8 April 2013

ಆತ್ಮ ಶುದ್ಧಿ

ಮಾನ ಮರ್ಯಾದೆ ಬಿಟ್ಟು 
ಪ್ರಜೆಗಳ ದುಡ್ಡನು ತಿಂದು,
ಸಭೆಗಳಲಿ ಸನ್ಮಾನ ಮಾಡಿಸಿಕೊಂಡು 
"ದೇಶದ ಅಭಿವೃದ್ಧಿ ನಮ್ಮ ಹೊಣೆ"
ಎಂದು ರಾಜಕಾರಣಿ ಭಾಷಣ ಮಾಡುತಿರುವಾಗ 

ಕಂಡವರ ಮನೆ ಹೆಂಗಸರ ಮೇಲೆ 
ಕಣ್ಣು ಹಾಕುತ್ತ ಹೆಂಡತಿಗೆ ಮೋಸ 
ಮಾಡುತ್ತಿದ್ದ ಪೂಜಾರಿ
"ಧರ್ಮೇಚ ಅರ್ಥೇಚ ಕಾಮೇಚ
ನಾತಿ ಚರಾಮಿ" ಎಂದು ಪ್ರಮಾಣ ಮಾಡಿಸಿ
ವರನಿಗೆ ಉಪದೇಶ ಕೊಡುವಾಗ

ಮಾನವೀಯತೆ, ನೀತಿ, ಧರ್ಮ ಎಂದು
ಮಾರುದ್ದ ಕವಿತೆ ಬರೆದ ಕವಿ
ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಕುತಂತ್ರ ಮಾಡಿ
ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ
ಬಕೀಟು ಹಿಡಿದಾಗ

ದೇಶ ಸ್ವಚ್ಚವಾಗಿಡಿ ಎಂದು
ಉಪದೇಶ ಕೊಡುವ ಶಿಕ್ಷಕ
ಎಲ್ಲ ಮಲಗಿರುವ ಸಮಯದಲ್ಲಿ ಸದ್ದು ಮಾಡದೆ
ಪಕ್ಕದ ಮನೆಯ ಕಾಂಪೌಂಡಿನೊಳಗೆ
ಕಸ ಎಸೆದಾಗ

ಮನಸಲಿಹ ಹೊಲಸೆಲ್ಲ ಉಕ್ಕಿತ್ತು
ಅವರಾತ್ಮವೇ ನೋಡಿ ನಕ್ಕಿತ್ತು

No comments:

Post a Comment