ಬೆಳಕು ಹಂಚಿದ ವೀರರು.......
ರಕ್ತ ಚೆಲ್ಲಿದರಿವರು ರಣ ಕಹಳೆ ಊದುತಲಿ
ಠೇಂಕರಿಸಿ ನಿಂತರೀ ದೇಶಕಾಗಿ
ಸ್ವಾತಂತ್ರ್ಯ ದೀಪವನು ಬೆಳಗುವಾ ಕನಸಲ್ಲಿ
ನೆತ್ತರೆಣ್ಣೆಯನೆರೆದರು ಹೊಳೆಯಾಗಿ
ತಾಯಿ ಭಾರತಿಯ ಪ್ರೀತಿಯಾ ಪಾಶದಲಿ
ತನ್ಮಯತೆಯಲ್ಲಿ ಪರವಶರು ಆಗಿ
ಜೀವನದ ಸುಖ ಸ್ವಾರ್ಥವೆಲ್ಲವನು ತೊರೆದು
ತಲೆ ಕೊಟ್ಟು ಹೋದರೀ ದೇಶಕಾಗಿ
ಇಂದು ನಾವೆಲ್ಲ ತಲೆಯೆತ್ತಿ ನಿಂತಿಹೆವು
ಇದಕೆ ಕಾರಣ ಇವರ ಯೋಗ, ತ್ಯಾಗ
ಹಚ್ಚಿಹರು ಇವರೆಲ್ಲ ಸ್ವಾತಂತ್ರ್ಯ ಜ್ಯೋತಿಯನು
ಎಣ್ಣೆ ಎರೆಯುವ ಕೆಲಸ ನಮ್ಮದೀಗ.....
No comments:
Post a Comment