ಸ್ವಾತಂತ್ರ್ಯ ರಣಕಹಳೆ
ರುದ್ರ ರೂಪವ ತಾಳಿ
ಎಲ್ಲರಾ ಹೃದಯದಲಿ
ಕ್ರಾಂತಿಗೀತ
ದೇಶಭಕ್ತರು ಎದ್ದು
ಆಗಿಹರು ರಣಹದ್ದು
ಬಿಳಿಯರನು ಕಿತ್ತದುವೆ
ತಿನ್ನಲೆಂದು
ಜಲಿಯನ್ವಾಲಾ-
-ಬಾಗಿನಾ ಮಧ್ಯದಲಿ
ಸ್ವಾತಂತ್ರ್ಯ ಅಗ್ನಿಯನು
ಉರಿಸುತಿಹರು
ಪಕ್ಕದಾ ಬೀದಿಯಲಿ
ಹಸಿದ ಶ್ವಾನವು ಒಂದು
ಜೊಲ್ಲನ್ನು ಸುರಿಸುತ್ತ
ನಿಂತಿರುವುದು
ತನ್ನ ಹಸಿವಿನ ಅಗ್ನಿ
ತಂಪುಗೊಳಿಸಲು ಅದುವು
ರಕ್ತ ಮಾಂಸವ ತಿನಲು
ಕಾಯುತಿಹುದು
ತನ್ನವರು, ಪರಕೀಯ
ಎಂದೆನದೆ ಈ ಶ್ವಾನ
ಎಲ್ಲರನು ಸೀಳುತ್ತ
ತಿನ್ನುತಿಹುದು
ಆ ನಾಯಿ ಮತ್ತೀಗ
ಮರುಜನ್ಮ ಪಡೆದಿಹುದು
ಭ್ರಷ್ಟ ಜನ ನಾಯಕನಾ
ರೂಪ ತಳೆದು
ದೇಶವನು ಕಿತ್ತವನು
ತಿನ್ನುತ್ತ ತೇಗುತ್ತ
ಭೂರಿ ಭೋಜನವನ್ನು
ಮಾಡುತಿಹನು
ಒಳ್ಳೆಯ ವಿಡಂಬಾತ್ಮಕ ಕವನ. ಪ್ರತಿಮೆಗಳ ಬಳಕೆಯಲ್ಲಿ ಮತ್ತು ಪದಗಳನ್ನು ಈಟಿಯಂತೆ ಬಳಸುವುದರಲ್ಲಿ ನೀವು ಗೆದ್ದಿದ್ದೀರಿ.
ReplyDeleteಛಾಟಿ ಹೀಗೇ ಬೀಸುತ್ತಿರಿ ಗೆಳೆಯ!
ನನ್ನ ಬ್ಲಾಗಿಗೂ ಬನ್ನಿರಿ.