ತಾಯಿ ಭುವನೇಶ್ವರಿಯ ಹೆಮ್ಮೆಯಾ ಪುತ್ರ ನೀ
ಮಲೆನಾಡ ಸಿರಿಗೊಂದು ರತ್ನ ಹಾರ
ಸಾಹಿತ್ಯ ಜೋತಿಯಾ ಬೆಳಗದುವೆ ಹೋದೆ ನೀ
ಒಪ್ಪ ಣದಿ ಕಟ್ಟಿರುವೆ ತಾಯ ತೇರ
ವಿಶ್ವ ಮಾನವನಾಗಿ ತತ್ವ ಸಾರವ ಸಾರಿ
ಜನಕೆಲ್ಲ ನೀಡಿರುವೆ ನೀತಿ ಪಾಠ
ನಿನ್ನ ಮನ ಗೆಲ್ಲುವ ಬರವಣಿಗೆ ಚೆಂದದಿ
ಕನ್ನಡಕೆ ಒದಗಿಸಿದೆ ಜ್ಞಾನಪೀಠ
ಜಂಜಾಟ ತುಂಬಿರುವ ಸಣ್ಣದೀ ಬದುಕಲ್ಲಿ
ನಿನ್ನ ಕೃತಿ ಕಾವ್ಯಗಳು ತಂಪು ಸೊಂಪು
ಕನ್ನಡದ ಬೆಲೆ ಕಟ್ಟಲಾಗದಾ ಆಸ್ತಿ ನೀ
ಮತ್ತೊಮ್ಮೆ ಹುಟ್ಟಿ ಬಾ ಕುವೆಂಪು
No comments:
Post a Comment