ಮೂರ್ತಿಯ
ಮೇಲೆರೆದ ಹಾಲು
ಕೊಚ್ಚೆ ಸೇರಿತ್ತು
ಅದ ನೋಡಿ
ಕರು ಕಣ್ಣೀರು ಹಾಕಿತ್ತು
******
ಮಕ್ಕಳಿಗೋಸ್ಕರ
ಉಪವಾಸ ಮಾಡಿದಳು.
ಈಗ ಮಕ್ಕಳು
ಉಪವಾಸಗೆಡವಿದ್ದಾರೆ
*********
ರೈಲು ನಿಲ್ದಾಣದಿ
ಶ್ರೀಮಂತನಿಗೆ
ಹತ್ತಾರು ಹೂವಿನ ಮಾಲೆ,
ಅಲ್ಲಿದ್ದ ನಿರ್ಗತಿಕರಿಗೆ
ಅದರ ಸುಗಂಧವೇ ಊಟ
*********
ಪೈಸೆ ಪೈಸೆ ಕೂಡಿಟ್ಟ
ಅನುಭವಿಸಿ ಸಜ
ಈಗದರಿಂದ ಯಾರೋ
ಮಾಡುತಿಹರು ಮಜ
************
ಆ ಹುಲಿ
ಕಾಡೆಮ್ಮೆಯ
ಹೊಸಕಿ ಹಾಕಿತ್ತು,
ಕಿವಿಗೆ ಚಿಕ್ಕ ನೊಣ
ಹೊಕ್ಕಾಗ ಅಸಹಾಯಕ!
*************
ವೇದ, ಉಪನಿಷತ್
ಅಧ್ಯಯನ ಮಾಡಿ
ಅವನು ಸಾರಿದ್ದು
ಅಧರ್ಮ
**************
ಕೋಟಿ ಇರುವವ
ಊಟ ಮಾಡದಿದ್ದರೆ
ಡಯಟ್
ಬಡವ ಮಾಡದಿದ್ದರೆ
ಉಪವಾಸ
***************
ಅವನದು
ರತ್ನಗಂಬಳಿ ಹೊದ್ದ
ಚಿನ್ನದ ಮಂಚ
ಆದರೆ ನಿದ್ದೆಯ
ಸುಳಿವಿಲ್ಲ
ದೈನಂದಿನ ಸಂಗತಿಗಳು, ಯೋಚನೆಗಳು ಹನಿಯಾಗಿ ಮಿತ್ರ ಪರೇಶರ ಕವಿಮನದ ಬೆಳಕಿಂಡಿಯ ಮುಖೇನ ಬೆಳಕು ಕಾಣುತ್ತಿವೆ. ಈ ಬೆಳಕು ಎಲ್ಲೆಡೆ ಪಸರಿಸಲಿ.
ReplyDeleteಪರೇಶ್,
ReplyDeleteಕಣ್ಣಿಗೆ ಕಂಡಿದ್ದನ್ನು ಚುಟುಕುಗಳಾಗಿ ಬರೆಯುವ ನಿಮ್ಮ ಪರಿಗೆ ಶರಣೂ.... ಎಲ್ಲಾ ಚೆನ್ನಾಗಿವೆ...
ಯಾವುದಕ್ಕೆ ಮಾರ್ಕ್ಸ್ ಹಾಕಲಿ ಯಾವುದನ್ನು ಬಿಡಲಿ ಅಕಟಕಟಾ...
ReplyDelete