Tuesday 22 November 2011

ಎಳೆಯೋಣ ಭಾರತಾಂಬೆಯ ತೇರು






"ಕೊಡು ನನ್ನ ಕೈಗೆ ಧ್ವಜ,
ನೆಡುವೆ ಅದನು ನಭೋಮಂಡಲದಲಿ"
ಎನುತಿದೆ ಈ ಪುಟ್ಟ ಕಂದ.
ಅದರ ನಿರ್ಮಲ ಹೃದಯ
ಪಟ ಪಟ ಬಡಿದು ಹೇಳುತಿದೆ,
"ವಿಶ್ವದಲಿ ನನ್ನ ದೇಶವೇ ಚೆಂದ" ||


ದುಷ್ಟ ನಾಯಕರು ತಿಂದು,
ದಷ್ಟ ಪುಷ್ಟವಾಗಿ, ಇಷ್ಟವಾದುದ ಮಾಡಿ
ಮೆರೆಯುತಿರುವಾಗ,
ಕ್ಲಿಷ್ಟ ಪ್ರಪಂಚದ ಕಷ್ಟ ಗೊತ್ತಿರದ
ಈ ಕೂಸಿಗೆ ಸ್ಪಷ್ಟವಾಗಿ ಕಾಣುತಿರುವುದು
ಆ ಮೂರು ಬಣ್ಣಗಳು- ಕೇಸರಿ,ಬಿಳಿ,ಹಸಿರು
ಈತ ಭಾರತದ ಹೊಸ ಚಿಗುರು. ||


ಉದಯವಾಗಲಿ ಎಲ್ಲರಲು ದೇಶಭಕ್ತಿಯ ನಿರ್ಮಲ ಚಿಲುಮೆ
ಭಾರತವು ತನ್ನ ಮನೆಯೆಂಬ ಸ್ವಂತಿಕೆಯ ಒಲುಮೆ||
ಕೂಡಿದರೆ ಸೊಗಸು ಹೊಸ ಚಿಗುರು ಹಳೆ ಬೇರು
ಎಲ್ಲ ಸೇರಿ ಎಳೆಯೋಣ ಭಾರತಾಂಬೆಯ ತೇರು||


No comments:

Post a Comment