Monday, 21 November 2011

ಬೆಳಗು ನೀನು ಮಾನವ, ಜನ ಮಾನಸ ದೀಪವ..








ಜಯದ ಹೊಸ್ತಿಲಲಿ, 
ಸೋಲುಂಡ ಜನರಿಹರು 
ಅಹಂ ಬೇಡ ಮಾನವ 
ಗೆದ್ದೆ ಎಂಬ ಮದದ ಭರದಿ
ಆಗಬೇಡ ದಾನವ

ಇಂದು ಗೆಲುವು, ನಾಳೆ ಸೋಲು 
ಯಾವುದಿಲ್ಲಿ ಶಾಶ್ವತ?
ವಿನಯದಿಂದ ನಡೆದರದುವೆ 
ಪ್ರೀತಿಗನುವು ಖಂಡಿತ 

ನೀನು ಹೆಣೆದ ಅಹಂ ಬಲೆಯ
ನಡುವೆ ನೀನೆ ಸಿಲುಕುವೆ
ಹೊರಗೆ ಬರುವ ದಾರಿ ಕಾಣ್ದೆ
ತಪ್ಪ ನೆನೆದು ಮರುಗುವೆ 

ಪ್ರೀತಿ ಜ್ಯೋತಿ ಹಚ್ಚು ನೀನು
ಜನ ಮಾನಸ ಗುಡಿಯಲಿ 
ಚಿರ ಪ್ರಜ್ವಲ ಆ ಪ್ರಣತಿಯು
ಸ್ನೇಹ ಕಿರಣ ಬೀರಲಿ.......... 









No comments:

Post a Comment